![]() |
| ದೆಹಲಿ ಎನ್ಡಿಎ ಶಾಸಕ ಮಂಜಿಂದರ್ ಸಿಂಗ್ ಸಿರ್ಸಾ ಪ್ರಕಟಿಸಿರುವ ಭಿತ್ತಿಚಿತ್ರ. ಕೇಜ್ರಿವಾಲ್ ನೀರು ಕುಡೀತಿರೋ ಚಿತ್ರವನ್ನು ತಿರುಚಲಾಗಿದೆ! |
ಕೇಜ್ರಿವಾಲ್ 80,000 ರೂ. ಮದ್ಯ ಕುಡಿದರಂತೆ!
ಕರ್ನಾಟಕ ಸಿಎಂ ಎಚ್ಡಿ ಕುಮಾರಸ್ವಾಮಿ ಪ್ರಮಾಣವಚನದ ಸಂದರ್ಭ ಕರ್ನಾಟಕಕ್ಕೆ ಹಾಜರಾಗಿದ್ದ ಅನೇಕ ವಿಪಕ್ಷ ನಾಯಕರ ಪೈಕಿ ಆಮ್ ಆದ್ಮಿ ಪಾರ್ಟಿಯ ಮುಖಂಡ ಅರವಿಂದ ಕೇಜ್ರಿವಾಲ್ ಕೂಡ ಒಬ್ಬರು. ಕಾರ್ಯಕ್ರಮ ಮುಗಿದು ತಿಂಗಳ ನಂತರ ಸಾಮಾಜಿಕ ಕಾರ್ಯಕರ್ತ ಬಿ.ಎಸ್. ಗೌಡ ಎಂಬವರು ಸಮಾರಂಭಕ್ಕೆ ಆದ ಖರ್ಚಿನ ಮಾಹಿತಿಯನ್ನು ಆರ್ಟಿಐ ಮೂಲಕ ಪಡೆದಿದ್ದರು. ಅದರಲ್ಲಿ ಚಂದ್ರಬಾಬು ನಾಯ್ಡು ಸುಮಾರು 8.7 ಲಕ್ಷ ರೂ. ಹಾಗೂ ಅರವಿಂದ ಕೇಜ್ರಿವಾಲ್ ಸುಮಾರು 1.8 ಲಕ್ಷ ರೂ. ವೆಚ್ಚ ಮಾಡಿದ್ದಾರೆ ಎಂಬ ಮಾಹಿತಿ ನೀಡಲಾಗಿತ್ತು.ಕೇಜ್ರಿವಾಲ್ 80,000 ರೂ. ಮದ್ಯ ಕುಡಿದು ಮೋಜು ಮಾಡಿದರು ಅಂತ ಬಿಜೆಪಿ ಭಕ್ತ ಪಡೆ ಮೀಮ್ಗಳನ್ನು ಸಾಮಾಜಿಕ ತಾಣದಲ್ಲಿ ಹರಡುತ್ತಿದೆ. ಆದರೆ ಅಸಲಿಗೆ ತಾಜ್ ವೆಸ್ಟ್ ಎಂಡ್ ಹೋಟೆಲ್ ಬಿಲ್ನಲ್ಲಿ ಆಲ್ಕೋಹಾಲ್ನ ಪ್ರಸ್ತಾಪವೇ ಇಲ್ಲ!
ತಾಜ್ ವೆಸ್ಟ್ ಎಂಡ್ ಹೋಟೆಲ್ ನೀಡಿದ್ದ ಬಿಲ್ನಲ್ಲಿ ಏರೇಟೆಡ್ ಬೆವರೇಜಸ್ ಅನ್ನೋ ಕೆಟಗರಿಯಲ್ಲಿ 6,750 ರೂ. ಬಿಲ್ ಮಾಡಲಾಗಿದೆ. ಇದಲ್ಲದೆ ಫುಡ್/ ಜ್ಯೂಸಸ್ ಕೆಟಗರಿಯಲ್ಲಿ ಸುಮಾರು 80,000 ರೂ. ಬಿಲ್ ಮಾಡಲಾಗಿದೆ. ಇದರ ಹೊರತಾಗಿ ದಿನಕ್ಕೆ 32,000 ರೂ.ನಂತೆ ಎರಡು ದಿನಕ್ಕೆ 64,000 ರೂ. ಹೋಟೆಲ್ ರೂಂ ಬಾಡಿಗೆಯನ್ನು ಬಿಲ್ನಲ್ಲಿ ನಮೂದಿಸಲಾಗಿದೆ. ಜ್ಯೂಸಸ್ ಅಂದರೆ ಹಣ್ಣಿನ ರಸ, ಬೆವರೇಜಸ್ ಅಂದರೆ ಪೆಪ್ಸಿ, ಕೋಕಾ ಕೋಲಾದಂಥ ಪಾನೀಯಗಳು ಎಂಬುದು ಸ್ಪಷ್ಟವಾಗಿದ್ದರೂ ಖಾಲಿ ತಲೆಯ ಭಕ್ತಪಡೆಗೆ ಅರ್ಥವಾಗಿಲ್ಲ ಅಥವಾ ಅರ್ಥವಾಗಿದ್ದರೂ ತಮ್ಮ ಪ್ರೊಪಗಂಡಾಗೆ ಅಡ್ಡಿಯಾಗುತ್ತದೆ ಎಂಬ ಕಾರಣಕ್ಕೆ ಕುರುಡರಾಗಿದ್ದಾರೆ!
ಮದ್ಯ ಸೇವನೆ ಮಾಡಿಯೇ ಇಲ್ಲ!
ಒಂದೆರಡು ದಿನಗಳಿಂದ #ಕುಡುಕಕೇಜ್ರಿವಾಲ್ ಅನ್ನೋ ಹ್ಯಾಷ್ಟ್ಯಾಗ್ನಡಿ ಬಾಲ ಇಲ್ಲದ ಆದಿಮಾನವ ಪಡೆ ವಿಧವಿಧದ ಮೀಮ್ಗಳನ್ನು ಮಾಡಿ ಪ್ರಕಟಿಸುತ್ತಲೇ ಇದೆ. ಮಾಜಿ ಸಚಿವೆ ಶೋಭಾ ಕರಂದ್ಲಾಜೆಯಂಥ ಬಿಜೆಪಿ ನಾಯಕಿಯರೂ ಈ ಬಗ್ಗೆ ಟ್ವೀಟು ಮಾಡಿರುವುದೂ ಮತ್ತು ಸುರೇಶ್ಕುಮಾರ್ರಂಥ ಸಭ್ಯ ಹಾಗೂ ವಿವೇಕವಂತ ಎನಿಸಿಕೊಂಡಿರುವ ಶಾಸಕರು ಅದನ್ನು ರೀಟ್ವೀಟು ಮಾಡಿರುವುದು ಸದ್ಯದ ಬಿಜೆಪಿ ಸ್ಥಿತಿ ಬಲ್ಲವರಿಗೆ ಆಶ್ಚರ್ಯವನ್ನೇನೂ ಉಂಟುಮಾಡಲಿಕ್ಕಿಲ್ಲ.As per RTI ₹43lakhs of Karnataka tax payers money were spent on alcohol & stay of Kejriwal, Naidu, & other Maha Gat Bandhan leaders— Shobha Karandlaje (@ShobhaBJP) August 9, 2018
Most bizarre is ₹80000 spent only on alcohol (2hr stay) by @ArvindKejriwal
Its a cruel joke on farmers & BBMP staffs who committed suicide https://t.co/BZ5VgVLDXa
![]() |
| ಫುಡ್ ಆಂಡ್ ಬೆವರೇಜಸ್ಗೆ ಜಿಎಸ್ಟಿ ಹಾಕಲಾಗಿದೆ. ಮದ್ಯ ಜಿಎಸ್ಟಿ ವ್ಯಾಪ್ತಿಯಲ್ಲಿಲ್ಲ ಎಂಬುದನ್ನು ಭಕ್ತಪಡೆ ಮರೆತಿದೆ! |
ಇನ್ನು ಬಿಲ್ನ ಎರಡನೇ ಪುಟದಲ್ಲಿ ಮದ್ಯ, ಲಾಂಡ್ರಿ ಹೊರತುಪಡಿಸಿ ಉಳಿದ ಸಂಪೂರ್ಣ ವೆಚ್ಚ ಸರ್ಕಾರ ಭರಿಸುತ್ತದೆ ಅಂತ ದಪ್ಪಕ್ಷರಗಳಲ್ಲಿ ನಮೂದಿಸಲಾಗಿದೆ. ಕೇಜ್ರಿವಾಲರ ವಾಸ್ತವ್ಯ ಮತ್ತು ಊಟದ ಖರ್ಚು ಅಂತ ಸರ್ಕಾರಕ್ಕೆ 1.85 ಲಕ್ಷ ರೂ. ಬಿಲ್ ನೀಡಲಾಗಿದೆ. ಅಂದರೆ ಇದರಲ್ಲಿ ಮದ್ಯ ಅಥವಾ ಆಲ್ಕೋಹಾಲ್ನ ಖರ್ಚು ಸೇರಿಲ್ಲ!
![]() |
| ಮದ್ಯ, ಲಾಂಡ್ರಿ ಹೊರತುಪಡಿಸಿ ಕರ್ನಾಟಕ ಸರ್ಕಾರ ಭರಿಸಿರುವ ಬಿಲ್ ಇದು. ಅಂದರೆ ಇದರಲ್ಲಿರೋದು ಮದ್ಯದ ಖರ್ಚಲ್ಲ! |
*****
ಸ್ವರಾ ಹಿಂದೆ ಬಿದ್ದ ಟೀಶರ್ಟ್ ಪ್ರೇಮಿಗಳು!
ಇದೇ ರೀತಿಯ ಇನ್ನೊಂದು ಪ್ರಕರಣ ನಟಿ ಸ್ವರಾ ಭಾಸ್ಕರ್ರದ್ದು. ಇತ್ತೀಚೆಗೆ ನಟಿ ಕಂಗನಾ ರಣಾವತ್ ಜತೆ ಸುದ್ದಿಗೋಷ್ಟಿ ನಡೆಸಿದ್ದ ಜಗ್ಗಿ ವಾಸುದೇವ್, “ಗೋರಕ್ಷಣೆ ಹೆಸರಿನಲ್ಲಿ ನಡೆಯುವ ಹಲ್ಲೆಗಳು ಗ್ರಾಮೀಣ ಭಾರತದ ಸಹಜ ಚಟುವಟಿಕೆಗಳು. ಅದನ್ನು ಉದಾರವಾದಿಗಳು ಮತಾಂಧತೆ ಎಂಬಂತೆ ಬಿಂಬಿಸುತ್ತಿದ್ದಾರೆ..” ಎಂಬರ್ಥದ ಮಾತು ಹೇಳಿದ್ದರು.I supported Jaggi in Rally for Rivers & appreciate Kangna's movies but what they're talking here is ridiculous!— Dhruv Rathee (@dhruv_rathee) August 9, 2018
- Calling Liberals as Fanatics
- Normalizing Mob Lynching by calling it "Real India"
- Kangana agreeing to it & saying it happens in her village
Crazy! pic.twitter.com/Vi9NBykvW2
ಅದಕ್ಕೆ ಪ್ರತಿಕ್ರಿಯೆಯಾಗಿ ''ಜಾತಿ ಅಮಲಿನ ಕೆಲ ಮೂಢರು ಅಮಾಯಕರನ್ನು ಜೀಪಿಗೆ ಕಟ್ಟಿ ಥಳಿಸಿದರು. ಮತ್ತು ಚಿತ್ರೀಕರಿಸಿದರು. ಆದರೆ ಉದಾರವಾದಿಗಳೇ ಮತಾಂಧರು ಅಂತಾರೆ ಸದ್ಗುರು” ಅಂತ ನಟಿ ಸ್ವರಾ ಟ್ವೀಟಿಸಿದ್ದರು.
Some assholes with big caste pride, tied men to a jeep, flogged them publicly and recorded it ; #ButLiberalsAreFanatics #SadhguruSays— Swara Bhasker (@ReallySwara) August 10, 2018
— Sabudana khichadi (@Dishasatra) August 10, 2018
1) what @ReallySwara really said,🥺— Rohan Kumar (@gohanvsrohan) August 10, 2018
2) What was the incident mentioned here🤕
3) What Gobi Bhakts thought what she said. 🤡 pic.twitter.com/4ODE71W2Sx
*****
ಮುಸ್ಲೀಮರು ಭಾರತದ ಸ್ವಾತಂತ್ರ್ಯಕ್ಕೆ ಸಂಭ್ರಮಿಸಿದರೂ ತಪ್ಪೇ!
ಇನ್ನೊಂದು ಘಟನೆ ಸ್ವಾತಂತೋತ್ಸವಕ್ಕೆ ಸಂಬಂಧಿಸಿದ್ದು. ''ಜಶ್ನ್ ಎ ಆಜಾದಿ, ಆಗಸ್ಟ್ 14ರ ಸಂಜೆ'' ಎಂಬ ಭಿತ್ತಿಫಲಕವನ್ನ ನೋಡಿದ ಭಕ್ತಪಡೆಯ ಒಬ್ಬಾಕೆ “ಎಂಥ ದೇಶದ್ರೋಹಿಗಳು ಇವರು. ಪಾಕಿಸ್ತಾನವನ್ನು ಬೆಂಬಲಿಸುತ್ತಿದ್ದಾರೆ” ಎಂಬರ್ಥದಲ್ಲಿ ಪ್ರತಿಕ್ರಿಯಿಸಿದಳು.This is how Sanghi propaganda machinery works.— Arif Khan (@ArifKIndian) August 11, 2018
They can't even see tricolor all over the hoarding.
And by the way Madam @GitaSKapoor ,
Do you even know the meaning of Independence Day Eve??
Brainless B*****ds. https://t.co/a9YyDLrCR2
Pic 1 : There is a Mushaira on the evening of Pre- Independence day. Such programs are organised everywhere on Pre Independence eve in India.— Md Asif Khan (@imMAK02) August 11, 2018
Pic 2&3 : IT Cell's cyber terrorist like @mvmeet and other spreading fake news about @ShayarImran . pic.twitter.com/PnyedK31AC



No comments:
Post a Comment